ಅಪಘಾತದಲ್ಲಿ ಸಾವು
ಸಂಚಾರ ಪೊಲೀಸ್ ಠಾಣೆ ಮೊ.ಸಂ.108/2012 ಕಲಂ 279 304(ಎ)ಐಪಿಸಿ – ದಿನಾಂಕ 21/09/2012 ರಂದು 0615 ಗಂಟೆಯಲ್ಲಿ ಬೈಪಾಸ್ ರಸ್ತೆಯ ನರಿಗುಡ್ಡನಹಳ್ಳಿ ಕ್ರಾಸ್ ಬಳಿ ಪಿರ್ಯಾದುದಾರರಾದ ಶಂಕರಪ್ಪ ಇವರ ದೊಡ್ಡಪ್ಪ ಲಕ್ಷ್ಮಣಗೌಡ ರವರ ಮಗನಾದ ಜಯಣ್ಣ, ಸುಮಾರು 41 ವರ್ಷ, ಇವರು ಎಂದಿನಂತೆ ಕೂಲಿ ಕೆಲಸಕ್ಕೆ ಹೋಗಲು ತಮ್ಮ ಬಾಬ್ತು ಕೆಎ-18-ಎಲ್-3262 ರ ಟಿವಿಎಸ್ ಎಕ್ಸ್ಎಲ್.ನಲ್ಲಿ ಹೋಗುತ್ತಿರುವಾಗ, ಎ.ಐ.ಟಿ ಸರ್ಕಲ್ ಕಡೆಯಿಂದ ಬಂದ ಕೆಎ-18-ಎನ್-7891 ರ ಇಂಡಿಕಾ ವಿಸ್ಟಾ ಕಾರಿನ ಚಾಲಕ ಜಿ. ಸತೀಶ್ ನಾಯ್ಕರವರು ಅತೀವೇಗ ಮತ್ತು ಆಜಾಗರೂಕತೆಯಿಂದ ಕಾರನ್ನು ಚಾಲನೆ ಮಾಡಿಕೊಂಡು ಬಂದು ಜಯಣ್ಣ ಚಾಲನೆ ಮಾಡುತ್ತಿದ್ದ ಟಿವಿಎಸ್ ಎಕ್ಸ್ಎಲ್ ಗೆ ಎದುರಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ,ಜಯಣ್ಣ ರವರು ಗಾಯಗೊಂಡು ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಟಿ.ವಿ.ಎಸ್ ಜಖಂಗೊಂಡಿರುತ್ತೆ.
ಕಳುವು ಪ್ರಕರಣ
ಬಸವನಹಳ್ಳಿ ಪೊಲೀಸ್ ಠಾಣೆ ಮೊ.ಸಂ.81/2012 ಕಲಂ 457 380 ಐಪಿಸಿ – ದಿನಾಂಕ 20/09/2012 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಉಪ್ಪಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬೀಗ ಮುರಿದು ಶಾಲೆಯ ಒಳಗೆ ಅಕ್ಷರ ದಾಸೋಹದ ಅಡುಗೆ ಮನೆಯಲ್ಲಿ ಇಟ್ಟಿದ್ದ 2 ಹೆಚ್.ಪಿ ಸಿಲಿಂಡರ್ ಹಾಗೂ 1 ಕ್ವಿಂಟಾಲ್ ಅಕ್ಕಿ 50 ಕಿಲೋ ಬೇಳೆ ಹಾಗೂ 10ಲೀಟರ್ ಎಣ್ಣೆಯನ್ನು ಕಳುವು ಮಾಡಿಕೊಂಡು ಹೋಗಿದ್ದು ಅವುಗಳ ಬೆಲೆ ಸುಮಾರು 12000-00 ರೂ ಗಳಾಗಿರುತ್ತೆ ಇತ್ಯಾದಿ ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ಶಾಲೆಯ ಪ್ರಾದ್ಯಾಪಕ ಮಾನಪ್ಪ ಇವರು ದೂರು ನೀಡಿರುವುದಾಗಿರುತ್ತೆ.
ಜೂಜಾಟ ಪ್ರಕರಣ
ಗೋಣಿಬೀಡು ಪೊಲೀಸ್ ಠಾಣೆ ಮೊ.ಸಂ.61/2012 ಕಲಂ 87 ಕೆ.ಪಿ.ಆಕ್ಟ್ – ದಿನಾಂಕ 21/09/2012 ರಂದು 1900 ಗಂಟೆಯಲ್ಲಿ ಉಗ್ಗೇನಹಳ್ಳಿ ಗ್ರಾಮದಲ್ಲಿ ಪಿಎಸ್ಐ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆಇಸ್ಪಿಟ್ ಜೂಜಾಟ ಆಡುತ್ತಿದ್ದಾರೆಂದು ಖಚಿತ ವರ್ತಮಾನ ಮೇರೆಗೆ ದಾಳಿ ನೆಡೆಸಿದ್ದು, ಇವರುಗಳು ಇಸ್ಪೀಟ್ ಆಟ ಆಡಲು ಉಪಯೋಗಿಸುತ್ತಿದ್ದ ಒಟ್ಟು 480/- ರೂ ಹಣವನ್ನು ಹಾಗೂ 52 ಇಸ್ಪೀಟ್ ಎಲೆಗಳನ್ನು ಮತ್ತು ನೆಲಕ್ಕೆ ಹಾಸಿದ್ದಬಿಳಿಯ ಪ್ಲಾಸ್ಟಿಕ್ ಚೀಲವನ್ನು ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತದೆ.ಆರೋಪಿಗಳಾದ ನಿಂಗಯ್ಯ ಹಾಗೂ ಇತರೆ 3 ಜನರನ್ನುದಸ್ತಗಿರಿ ಮಾಡಿರುತ್ತೆ.
ಮಟ್ಕಾಜೂಜಾಟ ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ.201/2012 ಕಲಂ 78 ಕ್ಲಾಸ್(3) ಕೆ.ಪಿ.ಆಕ್ಟ್ – ದಿನಾಂಕ 21/09/2012 ರಂದು 1945 ಗಂಟೆಯಲ್ಲಿ ಪಿಎಸ್ಐ ರವರು ಕರ್ತವ್ಯದಲ್ಲಿ ಇದ್ದಾಗ ಮಟ್ಕಾಜೂಜಾಟ ನಡೆಯುತ್ತಿದೆ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಎಪಿಎಂಸಿ ಯಾರ್ಡ್ ಬಳಿಯ ಸ್ಥಳಕ್ಕೆ ಹೋದಾಗ ದಾದು ಎಂಬ ಆಸಾಮಿ ಜನರನ್ನು ಗುಂಪುಕಟ್ಟಿಕೊಂಡು ಸಿಂಗಲ್ ನಂಬರ್ ಗೆ 10/- ರೂ ಕಟ್ಟಿದರೆ 80/- ರೂ ಕೊಡುವುದಾಗಿ ಜನರಿಂದ ಹಣಪಡೆದು ಮಟ್ಕಾಜೂಜಾಟ ಆಡುತ್ತಿದ್ದವನನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಆಟಕ್ಕೆ ಬಳಸಿದ ಮಟ್ಕಾ ಚೀಟಿ ಬಾಲ್ ಪೆನ್ 350/- ರೂ ಹಣ ವಶಪಡಿಸಿಕೊಂಡು ಮುಂದಿನ ಕ್ರಮಕ್ಕೆ ವರದಿ ನೀಡಿದ್ದಾಗಿದೆ
ದಲಿತರ ಮೇಲೆ ದೌರ್ಜನ್ಯ ಪ್ರಕರಣ
ಅಜ್ಜಂಪುರ ಪೊಲೀಸ್ ಠಾಣೆ ಮೊ.ಸಂ.123/2012 ಕಲಂ 143 144 341 323 324 504 149 ಐಪಿಸಿ ಜೊತೆಗೆ 3 ಕ್ಲಾಸ್(1)(10)&(11) ಎಸ್ಸಿಎಸ್ಟಿ ಆಕ್ಟ್ – ದಿನಾಂಕ 21/09/2012 ರಂದು 1945 ಗಂಟೆಯಲ್ಲಿ ಕಾಟಿಗನೆರೆ ಗ್ರಾಮದ ಪರಿಷಿಷ್ಠ ಕಾಲನಿಯಲ್ಲಿ ಇರಿಸಲಾಗಿದ್ದ ಗಣಪತಿ ವಿಸರ್ಜನೆ ಪ್ರಯುಕ್ತ ಮೆರವಣಿಗೆಯಲ್ಲಿ ಪಿರ್ಯಾದುದಾರರಾದ ಮಂಜುನಾಥ ಇವರು ಫಿರ್ಯಾದುದಾರರು ಮತ್ತು ಇತರೆಯವರು ಮೆರವಣಿಗೆಯಲ್ಲಿ ಗಣಪತಿಯನ್ನು ತೆಗೆದುಕೊಂಡು ಗ್ರಾಮದ ಲಿಂಗಾಯಿತರ ಬೀದಿಯಲ್ಲಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಹತ್ತಿರ ಪೂಜೆ ಸಲ್ಲಿಸಿ ವಾಪಾಸು ಬರುತ್ತಿರುವಾಗ್ಗೆ ಆರೋಪಿತರುಗಳಾದ ರಾಜಪ್ಪ ಹಾಗೂ ಇತರೆ 7 ಜನರು ಅಕ್ರಮ ಕೂಟ ಕಟ್ಟಿಕೊಂಡು ಬಂದು ಪರಿಷಿಷ್ಟ ಜಾತಿಯವರನ್ನು ತಡೆದು ಡ್ರಂ ಬಡಿಯಬಾರದೆಂದು, ಪಟಾಕಿ ಹೊಡೆಯಬಾರದೆಂದು ಗಲಾಟೆ ಮಾಡಿ ಕಲ್ಲುಗಳನ್ನು ತೂರಿದ್ದರಿಂದ ಈ ಕೇಸಿನ ಫಿರ್ಯಾದಿ ಮತ್ತು ಕೆ.ಆರ್ ರಾಜಪ್ಪ, ಅಣ್ಣಪ್ಪ ಇವರಿಗೆ ತಲೆಗೆ ರಕ್ತಗಾಯವಾಗಿದ್ದು,ಅಲ್ಲದೇ ಗಂಗಾಧರಪ್ಪನಿಗೆ ಆರೋಪಿತರಾದ ರಾಜಪ್ಪ ಪ್ರೇಂಕುಮಾರ ಮತ್ತು ಪರಮೇಶ್ವರಪ್ಪ ಇವರುಗಳು ಹಿಡಿದು ಎಳೆದಾಡಿ ನಮ್ಮ ಬೀದಿಗೆ ನಿಮ್ಮ ಗಣಪತಿ ತಂದಿರುತ್ತೀರಾ, ಮಾದಿಗ ಸೂಳೇಮಕ್ಕಳಾ ಎಂದು ಬೈದು ಕೈಯಿಂದ ಹೊಡೆದು ಬೀಳಿಸಿ ಕಾಲುಗಳಿಂದ ತುಳಿದು ಸೂಳೇಮಕ್ಕಳಾ, ನಿಮ್ಮನ್ನು ಮುಗಿಸುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಲಿಂಗಾಯಿತ ಸಮುದಾಯದವರಿಗೂ ಪರಿಷಿಷ್ಟ ಜಾತಿಯವರಿಗೂ ಗ್ರಾಮದ ಗೋಮಾಳಿನ ವಿಚಾರದಲ್ಲಿ 02 ವರ್ಷಗಳಿಂದ ತಕರಾರು ನಡೆಯುತ್ತಿದ್ದು ತರೀಕೆರೆ ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದು ವಿಚಾರದಲ್ಲಿ ಅರೋಪಿತರುಗಳು ಪರಿಶೀಷ್ಠ ಜಾತಿಯವರ ಮೇಲೆ ಗಲಾಟೆ ಮಾಡಿದ್ದಾಗಿದ್ದು ಇತ್ಯಾದಿ .