ಕಳುವು ಪ್ರಕರಣ
ಗ್ರಾಮಾಂತರ ಪೊಲೀಸ್ ಠಾಣೆ ಮೊ.ಸಂ- 38/2013 ಕಲಂ 457 380 ಐಪಿಸಿ – ದಿನಾಂಕ 29/01/2013 ರಂದು 2245 ಗಂಟೆಯಲ್ಲಿ ಪಿರ್ಯಾದುದಾರರಾದ ಮಹೇಂದ್ರ ಕೆ.ಬಿ,ಹಾಳ್ ವಾಸಿ ಇವರು ಶ್ರೀ ದುರ್ಗಾಂಭ ಬಾರ್ ಗೆ ಬಾಗಿಲು ಹಾಕಿಕೊಂಡು ಹೋಗಿದ್ದು ಬೆಳಿಗ್ಗೆ ಬಾರ್ಗೆ ಬಂದು ಒಳಗೆ ಹೋಗಿ ನೋಡಲಾಗಿ ಡ್ರಾನಲ್ಲಿದ್ದ 65,000/- ರೂ ಹಣವನ್ನು ಯಾರೋ ಕಳ್ಳರು ರಾತ್ರಿ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಪತ್ತೆಮಾಡಿಕೊಡಬೇಕಾಗಿ ಕೋರಿಕೆ.
ಕಳುವು ಪ್ರಕರಣ
ಆಲ್ದೂರು ಪೊಲೀಸ್ ಠಾಣೆ ಮೊ.ಸಂ- 15/2013 ಕಲಂ 457 380 ಐಪಿಸಿ – ದಿನಾಂಕ 29/01/2013 ರಂದು ರಾತ್ರಿ ವೇಳೆಯಲ್ಲಿ ಗುಲ್ಲನ್ಪೇಟೆಯ ಬಿ.ಎಸ್.ಎನ್.ಎಲ್.ದೂರವಾಣಿ ಕಛೇರಿಯ ಗೇಟಿನ ಬೀಗವನ್ನು ಯಾರೋ ಕಳ್ಳರು ನಕಲಿ ಕೀ ಬಳಸಿ ತೆಗೆದು ಒಳಗೆ ಪ್ರವೇಶ ಮಾಡಿ ಗೋಡನಲ್ಲಿಟ್ಟಿದ್ದ 1] 200 ಎ.ಹೆಚ್. 48 ಅಮಾರಾಜ್ ಕಂಪೆನೆಯ ಬ್ಯಾಟರಿಯ ಶೆಲ್ ಗಳು. 2] 150 ಮೀಟರ್ ಸ್ವೀಚ್ ಕೇಬಲ್ ವೈರ್. 3] 10 ಮೀಟರ್ 200 ಪೇರ್ 4/4 ಕೇಬಲ್. ಮತ್ತು ಜನರೇಟರ್ ರೂಂನಲ್ಲಿಟ್ಟಿದ್ದ 4] 03 ಬೆಂಕಿ ನಂದಿಸುವ ಸೀಲಿಂಡರ್ ಗಳು. ಸ್ವೀಚ್ ರೂಂನಲ್ಲಿಟ್ಟಿದ್ದ 5] ಎ.ಹೆಚ್. 15 ಎಕ್ಸಿಡ್.ಶೆಲ್ ಗಳು. ಈ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅವುಗಳ ಅಂದಾಜು ಬೆಲೆ 52.000.00 ರೂಗಳಾಗಿರುತ್ತೆ.ಪತ್ತೆಮಾಡಿಕೊಡಬೇಕೆಂದು ಪರಪ್ಪ ಬಿಎಸ್ಎನ್ಎಲ್ ಎಸ್ಡಿಓಟಿ ಇವರು ದೂರು ನೀಡಿರುವುದಾಗಿರುತ್ತೆ.
ಮನುಷ್ಯ ಕಾಣೆ
ಕಳಸ ಪೊಲೀಸ್ ಠಾಣೆ ಮೊ.ಸಂ- 03/2013 ಕಲಂ ಮನುಷ್ಯ ಕಾಣೆ – ದಿನಾಂಕ 24/01/2013 ರಂದು ಬಾಬು ಎಂ.ಬಿನ್ ತೋಮಯ್ಯ 65ವರ್ಷ ಗಂಗನಕೊಡಿಗೆ ವಾಸಿ ಇವರು ಕಳಸ ಪಟ್ಟಣಕ್ಕೆ ಹೋಗಿಬರುವುದಾಗಿ ಹೇಳಿ ಮನೆಯಿಂದ ಹೋದವರು ಇದುವರೆವಿಗೂ ಮನೆಗೆ ವಾಪಾಸು ಬಂದಿರುವುದಿಲ್ಲ. ನಾವುಗಳು ನೆಂಟರಮನೆ, ಸ್ನೇಹಿತರ ಮನೆ ಊರಿನಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಎಲ್ಲಿ ಇರುತ್ತಾರೆಂದು ತಿಳಿದುಬಂದಿರುವುದಿಲ್ಲ. ಪತ್ತೆಮಾಡಿಕೊಡಬೇಕೆಂದು ರಾಮಚಂದ್ರ ಇವರು ದೂರು ನೀಡಿರುವುದಾಗಿರುತ್ತೆ.
ಕಳುವು ಪ್ರಕರಣ
ತರೀಕೆರೆ ಪೊಲೀಸ್ ಠಾಣೆ ಮೊ.ಸಂ- 20/2013 ಕಲಂ 328 380 ಐಪಿಸಿ – ಸಂದೀಪ ಬಿನ್ ರಾಮಪ್ಪ ಈತನು ಪಿರ್ಯಾದಿ ಲಲಿತಮ್ಮ ಗಾಳಿಹಳ್ಳಿ ಕ್ರಾಸ್ ತರೀಕೆರೆಟೌನ್ ವಾಸಿ ಇವರ ಮನೆಗೆ ಬಂದಿದ್ದು ಅಲ್ಲೇ ಇದ್ದ ಒಂದು ಲೋಟಕ್ಕೆ ಜ್ಯೂಸ್ ಹಾಕಿ ಪಿರ್ಯಾದಿಗೆ ಕಾಣದಂತೆ ಮತ್ತು ಬರುವ ವಸ್ತುವನ್ನು ಜ್ಯೂಸ್ನಲ್ಲಿ ಹಾಕಿ ಪಿರ್ಯಾದುದಾರರಿಗೆ ನೀಡಿದ್ದು ಅದನ್ನು ಕುಡಿದ ಪಿರ್ಯಾದುದಾರರು ಜ್ಞಾನತಪ್ಪಿ ಮಲಗಿದ್ದು ಅವರ ಕೊರಳಿನಲ್ಲಿದ್ದ ಸುಮಾರು 35 ಗ್ರಾಂ ತೂಕದ ಎರಡು ಬಂಗಾರದ ತಾಳಿ ಮತ್ತು ಬಂಗಾರದ ಕಾಸು ಇರುವ ಮಾಂಗಲ್ಯಸರವನ್ನು ಮತ್ತು ಮನೆಯಲ್ಲಿಯೇ ಟೇಬಲ್ ಮೇಲೆ ಇಟ್ಟಿದ್ದ ಎರಡು ಮೊಬೈಲ್ ಮತ್ತು ದೇವರ ಮನೆಯಲ್ಲಿಟ್ಟಿದ್ದ 8000/-ರೂ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಇವುಗಳ ಒಟ್ಟು ಮೌಲ್ಯ ಸುಮಾರು 95000/-ರೂ ಆಗಿರುತ್ತೆ.