ಮಟ್ಕಾ ಜೂಜಾಟ ಪ್ರಕರಣ
ಮೂಡಿಗೆರೆ ಪೊಲೀಸ್ ಠಾಣೆ ಮೊ.ಸಂ- 78/2013 ಕಲಂ- 78 ಕ್ಲಾಸ್(3) ಕೆ.ಪಿ.ಆಕ್ಟ್– ದಿನಾಂಕ 29/04/2013 ರಂದು ಬಿಳಗುಳ ಬಳಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಗೆ 01-00 ರೂಪಾಯಿಗೆ 70-00 ರೂಪಾಯಿಯಂತೆ 10-00 ರೂಪಾಯಿಗೆ 700-00ರೂಪಾಯಿಗಳಂತೆ ಹಣವನ್ನು ಕೊಡುವುದಾಗಿ ಮಟ್ಕಾ ಜೂಜಾಟಕ್ಕೆ ಚೀಟಿಯನ್ನು ಬರೆಯುತ್ತಿದ್ದವನನ್ನು ಪಂಚರಸಮಕ್ಷಮ ವಶಕ್ಕೆ ಪಡೆದು ಮಹಜರ್ ನಡೆಸಿ ಮಟ್ಕಾ ಜೂಜಾಟಕ್ಕೆ ಉಪಯೋಗಿಸಿದ 660-00 ರೂಪಾಯಿ ನಗದು ಹಣ, montex ಎಂದು ಹೆಸರಿರುವ ಒಂದು ಪೆನ್ನು ಹಾಗು ಸಂಖ್ಯೆಗಳು ಇರುವ ಒಂದು ಬಿಳಿ ಹಾಳೆಯನ್ನು ಅಮಾನತ್ತು ಪಡಿಸಿಕೊಂಡು ಆರೋಪಿ ವೇಲು @ಅಣ್ಣಾಚಿ ಎಂಬುವನನ್ನು ದಸ್ತಗಿರಿ ಮಾಡಿರುತ್ತೆ.
ಅಪಘಾತದಲ್ಲಿ ಸಾವು
ಗೋಣಿಬೀಡು ಪೊಲೀಸ್ ಠಾಣೆ ಮೊ.ಸಂ- 63/2013 ಕಲಂ- 279 304(ಎ) ಐಪಿಸಿ- ದಿನಾಂಕ 29/04/2013 ರಂದು 1300 ಗಂಟೆಯಲ್ಲಿ ಬೇಲೂರು ಕಡೆಗೆ ಹೋಗುವ ಬಸ್ಸನ್ನು ಹತ್ತಲು ಪಿರ್ಯಾದಿ ಅಣ್ಣಾಮಲೈ ಹೆಂಡತಿ ಚಂದ್ರ, ಮಕ್ಕಳಾದ ಅನು, ಭಾರತಿ ಯವರೊಂದಿಗೆ ರಸ್ತೆ ದಾಟುತ್ತಿರುವಾಗ ಗೋಣಿಬೀಡು ಕಡೆಯಿಂದ ಬಂದ ಕೆಎ-15,ಎನ್-7077 ರಜೀಪಿನ ಚಾಲಕ ಜೀಪನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ ಮಗಳಾದ ಅನು 5 ವರ್ಷ ಪ್ರಾಯ ಇವಳಿಗೆ ಡಿಕ್ಕಿ ಹೊಡೆಸಿದರ ಪರಿಣಾಮ ಅವಳ ತಲೆಗೆ ತೀವ್ರ ತರಹದ ರಕ್ತಗಾಯವಾಗಿ ರಸ್ತೆಯಲ್ಲಿ ಬಿದ್ದಳು, ನಂತರ ನನ್ನ ಮಗಳನ್ನು ಚಿಕಿತ್ಸೆಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಪರಿಕ್ಷಿಸಿದ ವೈದ್ಯರು ನನ್ನ ಮಗಳು ಮೃತಪಟ್ಟಿರುವುದಾಗಿ ತಿಳಿಸಿದರ. ಅಫಘಾತ ಮಾಡಿದ ಚಾಲಕನ ಹೆಸರ ವಿಳಾಸ ಕೇಳಲಾಗಿ ಲೋಕೇಶ, ವಾಸ ಉಜಿರೆ ಎಂಬುದಾಗಿ ತಿಳಿಸಿಯಿತು. ಅಪಘಾತ ಮಾಡಿ ಚಾಲಕನ ಮೇಲೆ ಕಾನೂನು ಕ್ರಮಕೈಗೊಳ್ಳಲು ಕೋರಿದ್ದಾಗಿರುತ್ತದೆ.
ಅಪಘಾತದಲ್ಲಿ ಸಾವು
ಲಿಂಗದಹಳ್ಳಿ ಪೊಲೀಸ್ ಠಾಣೆ ಮೊ.ಸಂ- 31/2013 ಕಲಂ- 279 304(ಎ) ಐಪಿಸಿ- ದಿನಾಂಕ 29/04/2013 ರಂದು 1415 ಗಂಟೆಯಲ್ಲಿ ಲೋಕೇಶ್ ರವರ ಶನಿದೇವರ ದೇವಾಸ್ಥಾನದ ಹತ್ತಿರ ವಿರುವ ಅಡಿಕೆ ತೋಟಕ್ಕೆ ಬೋರ್ ವಲ್ ಕೊರೆಸಲು ಈ ದಿವಸ ಕೆ.ಎ. ಕೆ.ಎ. 01 ಎಂ.ಕೆ. 275 ಬೋರ್ ವೆಲ್ ಲಾರಿಯನ್ನು ಕರೆಸಿದ್ದರು . ಬೋರ್ ವೆಲ್ ಕೊರೆಯುತ್ತಿದ್ದರಿಂದ ಅದನ್ನು ನೋಡಲು ನಾನು ಮನು ಇತರರು ಹೋಗಿದ್ದೆವು, ಇದೆ ಲಾರಿಯನ್ನು ಕುಂಟಿನ ಮಡುವಿಗೆ ಕರೆದುಕೊಂಡು ಹೋಗಲು ನನ್ನ ಬಾವ ಈಶ್ವರಪ್ಪ ನವರು ಸಹ ಬೋರ್ ವೆಲ್ ಕೊರೆಯುತ್ತಿದ್ದ ತೋಟಕ್ಕೆ ಬಂದಿದ್ದರು. ನಾವು ಗಳು ನೋಡುತ್ತಿದ್ದಾಗ ಮದ್ಯಾಹ್ನ 2.15 ರ ಸಮಯದಲ್ಲಿ ಬೋರ್ ವೆಲ್ ಡ್ರಿಲ್ಲಿಂಗ್ ಮಿಷಿನ್ ಗೆ ಫಿಕ್ಸ್ ಮಾಡಿದ್ದ ಸುಮಾರು 18 ಅಡಿ ಉದ್ದದ ರಾಡು ಲಾರಿಯ ಕೆಲಸಗಾರರ ಬೇಜಾವಬ್ದಾರಿ ತನದಿಂದ ರಾಡು ಕಳಚಿಕೊಂಡು ನನ್ನ ಬಾವ ಈಶ್ವರಪ್ಪ ಬಿನ್ ಮರುಳ ಸಿದ್ದಪ್ಪ 45 ವರ್ಷ ಇವರ ತಲೆಯ ಮೇಲೆ ಬಿದ್ದಿದ್ದರಿಂದ ರಕ್ರ ಸ್ರಾವ ವಾಗಿದ್ದು ಅವರನ್ನು ಲಿಂಗದಹಳ್ಳಿಯ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ ಪಟ್ಟಿರುತ್ತಾರೆ.ಬೋರ್ ವೆಲ್ ಲಾರಿಯ ಡ್ರಿಲ್ಲಿಂಗ್ ಮಿಷನ್ ನ ರಾಡು ಲಾರಿ ಕೆಲಸಗಾರ ಸೆಂದಿಲ್ ರವರ ಬೇಜಾವಬ್ದಾರಿ ತನದಿಂದ ಈಶ್ವರಪ್ಪನವರ ತಲೆಯ ಮೇಲೆ ಬಿದ್ದು ಅವರು ಸಾವನಪ್ಪಿರುತ್ತಾರೆ.