ಬ್ರೌನ್ ಶುಗರ್ ವಶ
ಬಸವನಹಳ್ಳಿ ಪೊಲೀಸ್
ಠಾಣೆ ಮೊ.ಸಂ. 188/2013 – ಕಲಂ: 22 ಎನ್ಡಿಪಿಎಸ್ ಆಕ್ಟ್ – ದಿನಾಂಕ
30/10/2013 ರಂದು 1930 ಗಂಟೆಯಲ್ಲಿ ಪಿಎಸ್ಐ ರವರು ಠಾಣೆಯಲ್ಲಿರುವಾಗ ಜಾಲಿ ಫ್ರೆಂಡ್ ಸರ್ಕಲ್ ಗೆ ಯಾರೋ
ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಮೋಟಾರ್ ಸೈಕಲ್ ಗಳಲ್ಲಿ ತೆಗೆದುಕೊಂಡು ಬರುತ್ತಿದ್ದಾರೆಂದು
ಖಚಿತ ಮಾಹಿತಿ ದೊರೆತ ಮೇರೆಗೆ ಪಿಎಸ್ಐ ರವರು ಪಂಚಾಯಿತದಾರರು
ಮತ್ತು ಸಿಬ್ಬಂದಿಯೊಂದಿಗೆ ಸಂಜೆ 7.30 ಗಂಟೆ ಸಮಯಕ್ಕೆ ಡಿ.ಎ.ಸಿ.ಜಿ. ಪಾಲಿಟೆಕ್ನಿಕ್ ಎದುರು ಭುವನೇಶ್ವರ
ವೃತ್ತ [ಜಾಲಿ ಫ್ರೆಂಡ್ಸ್ ಸರ್ಕಲ್] ಬಳಿ ಕಾಯುತ್ತಿದ್ದಾಗ ಮೇಲ್ಕಂಡ 6 ಜನರು ಮೂರು ಮೋಟಾರ್ ಸೈಕಲ್ ಗಳಲ್ಲಿ ಬರುತ್ತಿದ್ದು ನಾನು ಸಿಬ್ಬಂದಿಯವರ
ಸಹಾಯದಿಂದ ಅವರನ್ನು ತಡೆದು ವಿಚಾರ ಮಾಡುತ್ತಿದ್ದಾಗ 3ನೇ ಆರೋಪಿ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ. ನಂತರ 1ನೇ ಆರೋಪಿಯ ವಶದಲ್ಲಿದ್ದ ಬ್ಯಾಗನ್ನು ಪರಿಶೀಲಿಸಲಾಗಿ
ಅದರಲ್ಲಿ ಬಿಳಿ ಸಕ್ಕರೆಯಂತ ಪದಾರ್ಥ ಇರುವ ಪ್ಯಾಕೆಟ್ ಇದ್ದು ಈ ಬಗ್ಗೆ 1ನೇ ಆರೋಪಿಯನ್ನು ವಿಚಾರಿಸಲಾಗಿ ಆತನು ಇದು ಬ್ರೌನ್
ಶುಗರ್ ಇದನ್ನು ಭದ್ರಾವತಿಯಿಂದ ತಂದಿದ್ದು ಚಿಕ್ಕಮಗಳೂರಿನಲ್ಲಿ
ಮಾರಾಟ ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದನು. ಈ ಬಗ್ಗೆ ಪರವಾನಗಿ ಇದೆಯೇ ಎಂದು ಕೇಳಲಾಗಿ ಇಲ್ಲವೆಂದು ತಿಳಿಸಿದನು.
ನಂತರ ಇದು ಎನ್.ಡಿ.ಪಿ.ಎಸ್. ಆಕ್ಟ್ ರೀತ್ಯ ಅಪರಾಧವಾದ್ದರಿಂದ ಸ್ಥಳಕ್ಕೆ ಶ್ರೀ ಲೋಕೇಶಪ್ಪ, ಸಹಾಯಕ ಕೃಷಿ ನಿರ್ದೇಶಕರು, ಚಿಕ್ಕಮಗಳೂರು [ಗೆಜೆಟೆಡ್ ಅಧಿಕಾರಿಗಳು] ಇವರನ್ನುಕರೆಯಿಸಿ ಇವರ ಸಮಯಕ್ಷಮ
ಸ್ಥಳದಲ್ಲಿ 1ನೇ ಆರೋಪಿ ವಶದಲ್ಲಿದ್ದ ಮಾದಕ ವಸ್ತುವಾದ ಬ್ರೌನ್ ಶುಗರನ್ನು ಹಾಗೂ ಆರೋಪಿಗಳು ತೆಗೆದುಕೊಂಡು
ಬಂದಿದ್ದ 3 ಮೋಟಾರ್ ಸೈಕಲ್ ಗಳನ್ನು ಮಹಜರ್ ಮುಖೇನ ಅಮಾನತ್ತುಪಡಿಸಿಕೊಂಡು ಕೇಸು ದಾಖಲಿಸಿಕೊಂಡಿರುತ್ತೇನೆ. ಆರೋಪಿಗಳಾದ ಮಧು
ಮತ್ತು ಜಸ್ಟಿನ್ ರವರನ್ನು ದಸ್ತಗಿರಿ ಮಾಡಿರುತ್ತೆ.
ಅಪಘಾತದಲ್ಲಿ ಸಾವು
ಕಡೂರು
ಪೊಲೀಸ್ ಠಾಣೆ ಮೊ.ಸಂ. 247/2013 – ಕಲಂ: 279 304(ಎ) ಐಪಿಸಿ – ದಿನಾಂಕ 30/10/2013 ರಂದು 1845 ಗಂಟೆಯಲ್ಲಿ ಟಿ ಮಧು ಸುಮಾರು 25 ವರ್ಷ ಈತನು ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್
ನಂಬರ್ ಕೆ ಎ 52 ಈ 2947 ರಲ್ಲಿ ಎನ್ ಹೆಚ್ 206 ರಸ್ತೆಯಲ್ಲಿ ಬಾಣಾವಾರ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ
ಲಾರಿ ನಂಬರ್ ಕೆ ಎ 19 7273 ರ ಚಾಲಕ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು
ಬಂದು ಟಿ ಮಧು ಇದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆಸಿ ಅಪಘಾತ ಮಾಡಿದ್ದು ಟಿ ಮಧುವಿನ ಬಲ ಕಾಲಿನ
ತೊಡೆ ಮೂಳೆ ಮುರಿದು ಮುಖ ತರಚಿ ರಕ್ತ ಗಾಯವಾಗಿ ಕಡೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ
ಮೃತ ಪಟ್ಟಿರುತ್ತಾನೆ, ಲಾರಿಯನ್ನು ಚಾಲನೆ ಮಾಡಿದ ಚಾಲಕನ ಹೆಸರು ಮತ್ತು ವಿಳಾಸ ತಿಳಿಯಲಾಗಿ
ಅರುಣ ಬೈರಗೊಂಡನಹಳ್ಳಿ, ಎಂದು ತಿಳಿದಿದ್ದು ಕ್ರಮ ಕೋರಿ ನೀಡಿದ ದೂರಿನ ಮೇರೆಗೆ ಈ ಪ್ರ,ವ,ವರದಿಯನ್ನು ದಾಖಲು ಮಾಡಿರುತ್ತೆ.